Skip to main content

samrudhasahitya

ಹಿಂದುಪದ-ಪಾದಶಾಹಿ

Pages: 310
Price: 300

ಮರಾಠರ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಗುಣಗ್ರಹಣೆ ಮಾಡಲು ಇದು ಅತ್ಯಂತ ವಿನೂತನವಾದ, ಅನನ್ಯವಾದ ಆಧಾರ. ಅನೇಕ ವಿದ್ವಾಂಸರು, ಇತಿಹಾಸ ಬಲ್ಲ ಮಹನೀಯರು ಈಗಾಗಲೆ ಮರಾಠಚರಿತ್ರೆಯ ಬಗ್ಗೆ ಸಾಕಷ್ಟು ಬರೆದಿದ್ದಾರಾದರೂ, ಅವುಗಳಲ್ಲಿ ಯಾವೊಂದೂ ವಿವರಗಳ ಮೇಲೇರಿ ಸಮಗ್ರವಾದ ದೃಷ್ಟಿಕೋನದಿಂದ ರಚಿತವಾಗಿಲ್ಲ. ಆಂದೋಲನದ ಪದರಗಳ ಒಳಹೊಕ್ಕು ನೋಡಿಲ್ಲ; ಅಸಲಿಗೆ ಎರಡು ಶತಮಾನಗಳ ಕಾಲ ನಿರಂತರವಾಗಿ ನಡೆದ ಮರಾಠಾಯುದ್ಧಗಳಿಗೆ ಮೂಲ ಕಾರಣ ಏನು, ಅವುಗಳನ್ನು ಪ್ರೇರಿಸಿದ ಸ್ಫೂರ್ತಿತತ್ತ÷್ವ ಯಾವುದು ಎಂಬುದನ್ನು ಈ ಗ್ರಂಥ, ಹಿಂದು ಪದ- ಪಾದಶಾಹಿ ನಿರೂಪಿಸುವಂತೆ ಮತ್ತಾವುದೂ ಹೇಳಿಲ್ಲ […]

ಸನಾತನ

Pages: 160
Price: 160

ಸನಾತನ ಧರ್ಮದ ವಿರುದ್ಧ ಪ್ರತಿನಿತ್ಯವೆಂಬAತೆ ವಿವಿಧ ಸ್ತರಗಳಲ್ಲಿ ಟೀಕೆ, ದಾಳಿ ನಡೆಯುತ್ತಲೇ ಇರುತ್ತದೆ. ಅದು ಈಗ ಮಾತ್ರ ಅಲ್ಲ, ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ಅವ್ಯಾಹತ ವಿದ್ಯಮಾನ. ಮುಂದೆಯೂ ಇಂತಹ ಟೀಕೆ,ವಿಮರ್ಶೆ,ದಾಳಿಗಳಾಗುವುದರಲ್ಲಿ ಅನುಮಾನವಿಲ್ಲ. ಸನಾತನ ಧರ್ಮ ಇಂತಹ ಹಲವು ಅಗ್ನಿಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡೇ ಕಾಲದ ಪ್ರವಾಹದಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿದೆ. ಚಿರಪುರಾತನ ಹಾಗೂ ನಿತ್ಯನೂತನವಾಗಿ ಕಂಗೊಳಿಸುತ್ತ, ಜಗದಗಲ ಬೆಳಕು ಬೀರುತ್ತಲೇ ಇದೆ.ಅದೇ ಸನಾತನ ಧರ್ಮದ ತಾಕತ್ತು. ಅದೇ ಸನಾತನದ ಮಹಿಮೆ. ಅದಕ್ಕೆ ಕಾರಣವೂ ಇದೆ.ಸನಾತನ ಧರ್ಮ ಅಥವಾ ಹಿಂದೂ […]

ಎಚ್ಚರ ಹಿಂದು

Pages: 130
Price: 130

ಈ ರೋಗಮೂಲವನ್ನು ಅರಿತಿರುವ ಕೆಲವು ಮಂದಿ ಒಂದು ಕಾಲದಲ್ಲಿ ವೈಭವಶಾಲಿಯಾಗಿದ್ದು ಈಗ ಅದೃಷ್ಟ ಹೀನವಾಗಿರುವ ಈ ಸಂಕಷ್ಟದ ಕಾಲದಲ್ಲಿ ವಿಜಯಿಯಾಗಲು ಸಾಧ್ರವಾಗುವಂತೆ ಮಾಡಲು ಮುಂದೆ ಬಂದಿರುತ್ತಾರೆ. ಮತ್ತು ಈ ಸಣ್ಣ ಪುಸ್ತಕದ ಲೇಖಕಿ ಅತ್ಯಂತ ಅವಶ್ಯವಾಗಿರುವ ಯೋಚನಾ ಪ್ರವಾಹವನ್ನು ಸೃಷ್ಟಿಸಿದ್ದಾರೆ ಹಾಗೂ ತನ್ಮೂಲಕ ನಮ್ಮ ಈ ಹಿಂದೂ ರಾಷ್ಟ್ರಕ್ಕೆ ಅತ್ಯವಶ್ಯವಾಗಿರುವ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಧಾರಾಳವಾಗಿ ಮೆಚ್ಚುಗೆ ಸಲ್ಲಿಸಬಹುದಾಗಿದೆ. ಅವರು ಒಂದು ದೃಷ್ಟಿಯಿಂದ ಹಿಂದೂ ಸಮೂಹದೊಳಗಿನ ಸಾಮಾನ್ಯ ಕಾರ್ಯಕರ್ತರಿಗಿಂತ ಹೆಚ್ಚು ಅನುಕೂಲದ ಸ್ಥಿತಿಯಲ್ಲಿದ್ದಾರೆ. ಅವರು ರಾಷ್ಟ್ರೀಯತೆಯಿಂದ ಗ್ರೀಕ್ […]

ಗಾಂಧಿ ನಿಜಕ್ಕೂ ಮಹಾತ್ಮರೇ?

Pages: 380
Price: 380

ಗಾಂಧಿಯವರ ಜೀವನದ ಕೊನೆಯ ದಿನಗಳಿಂದಲೂ ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಯೇನೆಂದರೆ, “ಗಾಂಧಿಯವರ ವಿಷಯದಲ್ಲಿ ಎಲ್ಲಿ ತಪ್ಪು ಸಂಭವಿಸಿತು? ಎಲ್ಲ ವಿಧದಲ್ಲಿಯೂ ಅವರು ವಿಫಲರಾಗಿದ್ದು ಹೇಗೆ?” ೧೯೧೮ರ ಸಮಯದಲ್ಲಿಯೂ ಕೂಡ ಅವರು ತಮ್ಮ ಹಲವು ವಿಚಾರಗಳು ಹಾಗೂ ನಿರ್ಧಾರಗಳಲ್ಲಿ ಹಿನ್ನಡೆಯನ್ನು ಕಂಡಿದ್ದಾರೆ. ಅದಾದ ನಂತರದ ಅವರ ಪ್ರತಿಯೊಂದು ಸೋಲು ಕೂಡ ಇದೇ ಪ್ರಶ್ನೆಯನ್ನು ಪರಾಮರ್ಶಿಸಿದೆ. ಭಾರತದ ವಿಭಜನೆಯ ನಂತರವAತೂ ಅವರು ತಮ್ಮ ವೈಫಲ್ಯವನ್ನು ಕುರಿತಾಗಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಅನೇಕ ಬಾರಿ ವಿಚಾರ ವಿಮರ್ಶೆಯನ್ನು ನಡೆಸಿದ್ದಾರೆ. ಆದರೆ ಗಾಂಧಿಯವರಾಗಲಿ […]

ಗಾಂಧಿ ಗೊಂದಲ

Pages: 120
Price: 120

‘ಗಾಂಧಿ ಗೊಂದಲ’ವೆAಬ ಈ ಮುಖ್ಯ ಪುಸ್ತಕವನ್ನು ಗಮನಿಸಬೇಕು. ಸಾವರ್ಕರ್ ಭಾರತ ಕಂಡ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಕವಿತೆಗಳನ್ನು ಇಷ್ಟ ಪಡುವವನು ನಾನು. ಗೋಪಾಲಕೃಷ್ಣ ಅಡಿಗರ ಕವನಗಳಲ್ಲಿ ಬರುವ ವ್ಯಂಗ್ಯ, ಸಾತ್ವಿಕ ಸಿಟ್ಟು, ವಿಶಿಷ್ಟ ರೂಪಕ ಶಕ್ತಿ ಇಲ್ಲಿ ನೆನಪಿಗೆ ಬರುತ್ತದೆ. ಸಾವರ್ಕರ್ ಈ ಲೇಖನಗಳ ಮೂಲಕ ಗಾಂಧಿಯೊಳಗೆ ಇರುವ ಒಬ್ಬ ಹಿಂದುವನ್ನು, ಈ ನೆಲದ ಮೂಲ ಗುಣವನ್ನು ಎಚ್ಚರಿಸಲು ಪ್ರಯತ್ನ ಪಟ್ಟಿದ್ದಾರೆ. ಆ ಕಾಲದಲ್ಲಿ ಈ ಶಕ್ತಿ ಇದ್ದದ್ದು ಸಾವರ್ಕರ್ ಮತ್ತು ಡಾ. ಅಂಬೇಡ್ಕರ್‌ಗೆ ಮಾತ್ರ. […]