ಸಂಘಕ್ಕೆ ಸರ್ವೋಚ್ಚ ಗುರು ತನ್ನ ಧ್ಯೇಯವೇ. ಅದು ಭಾರತದ ಮತ್ತದರ ಚೈತನ್ಯ ವೆನಿಸಿದ ಸನಾತನ ಧರ್ಮದ ರಕ್ಷಣಾ ತಾಣಗಳು. ಇದರ ಸಾಂಕೇತಿಕ ಪ್ರತೀಕ ಭಗವದ್ವಜ. ಇಂತಹ ಮಹಾನ್ ಧೇಯ ವೃಕ್ಷದ ಅಸಂಖ್ಯಾ ವರ್ಣಗಳಲ್ಲಿ ಅದರ ಕಾರ್ಯಕರ್ತರು ಸೇರುತ್ತಾರೆ ಪೂರ್ಣಾವಧಿಯ ಕಾರ್ಯಕರ್ತರೆ ಎನಿಸಿದ ಪ್ರಚಾರಕರೆ ಕೊಂಬೆ ರೆಂಬೆಗಳು . ಈ ಕಾದಂಬರಿಯು ಇಂತ ಮಹಾವೃಕ್ಷದ ಎಲೆ ಒಂದನ್ನು ಕೊಂಬೆ ಯಾಗಿ ಕೊನರಿ ಬೇರಿಗೆ ಬಲ ನೀಡುವ ಚಿತ್ರವನ್ನು ಈ ಪುಸ್ತಕವು ಕಟ್ಟಿ ಕೊಟ್ಟಿದೆ. ಈ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ವಟವೃಕ್ಷದ ಪರಿಚಯ ನಮಗಾಗುತ್ತದೆ. ಹೀಗೆ ಈ ಕೃತಿಯು ತನ್ನ ರಚನ ಉದ್ದೇಶವನ್ನು ನಿಚ್ಚಳವಾಗಿ ಮಾಡಿಕೊಂಡ ಕಾರಣ ಇದು ಇತಿ ವೃತ್ತದಲ್ಲಿ ಆಗಲಿ ಪಾತ್ರ ಚಿತ್ರಣದಲ್ಲಿ ಸನ್ನಿವೇಶಗಳ ನಿರ್ಮಾಣವಾಗಲಿ ಯಾವುದೇ ಬಿರುಕು ಇಲ್ಲದಂತೆ ಕದನ ಕ್ರಮವು ಬಿಲ್ಲಿನಿಂದ ನೆಗೆದ ಬಾಣದ ಹಾಗೆ ಇದೆ.